ನನ್ನದೊಂದು ಮಾತು - ಐದು
'ರಾತ್ರಿಯೆಲ್ಲ ಕಣ್ಮುಚ್ಚಿಲ್ಲ'.
ಆಫೀಸು ಮುಗಿಸಿ ಬಂದ ತಕ್ಷಣ ಅವಳಾಡಿದ ಮಾತಿದು. ಬನ್ನೇರುಘಟ್ಟ ಅರಣ್ಯದಲ್ಲಿ ಕಣ್ಮರೆಯಾಗಿ ಆನೆಯ ಕಾಲ್ತುಳಿತಕ್ಕೆ ಸಿಕ್ಕು ಮೃತನಾದವನು ಚಾರಣಕ್ಕೆ ಹೋಗಿದ್ದವನು ಎಂಬ ಟಿವಿ9 ಸುದ್ದಿಯನ್ನು ಕೇಳಿ ಕಳೆದ ರಾತ್ರಿ ನಿದ್ದೆ ಮಾಡಿಲ್ಲ ಎಂಬುದನ್ನು ಮತ್ತೊಮ್ಮೆ ಹೇಳಿದಳು. ಅದಕ್ಕೆ ಕಾರಣ ನಾನು ಊಹಿಸಿದ್ದರೂ ಅವಳನ್ನು ಕೇಳಿದೆ. ನಾನು ಕೂಡ ಆಗ್ಗಾಗ್ಗೆ ಚಾರಣಕ್ಕೆ ಹೋಗುತ್ತಿದ್ದುದರಿಂದ ನನಗೆಲ್ಲಿ ಅದೇ ಪರಿಸ್ಥಿತಿ ಬರುತ್ತದೋ ಎಂಬ ಕಳವಳ ಅವಳದು. ನನ್ನ ಊಹೆ ನಿಜವಾಗಿತ್ತು. ಮುಂದೆಂದೂ ಚಾರಣಕ್ಕೆ ಹೋಗಬಾರದು ಎಂಬ ಆಜ್ಞೆ ಕೂಡ ಹೊರಬಿತ್ತು. ಎಷ್ಟೇ ಮುಂಜಾಗರೂಕತೆ ಇದ್ದರೂ ಚಾರಣದಲ್ಲಿ ಇಂತಹ ಒಂದು ಅಪಾಯದ ಸಾಧ್ಯತೆ ಇದೆ ಎಂಬ ಮಾತು ಎಷ್ಟು ಸಮಂಜಸವೋ ಮುಂದೆಂದೂ ಚಾರಣಕ್ಕೆ ಹೋಗಬಾರದು ಎಂಬ ಮಾತು ಅಷ್ಟೇ ಅಸಂಬದ್ದ. ಕಳೆದ ವಾರವಷ್ಟೇ ಯಾವುದೇ ಅಪಾಯ, ಅಡಚಣೆಯಿಲ್ಲದೆ ಕೇರಳದ ಚೆಂಬ್ರ ಬೆಟ್ಟದಲ್ಲಿ ಚಾರಣ ಮಾಡಿದ್ದನ್ನು ನೆನೆದು ಅವಳು ಕೊಟ್ಟ ಕಾಫಿಯನ್ನು ಸವಿಯಲು ಮುಂದಾದೆ.
ಎಷ್ಟಾದರೂ ಮಾತೃ ಹೃದಯವಲ್ಲವೇ!
No comments:
Post a Comment